ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜ್ಞಾನ ವಿಭಾಗದ ಕಾರ್ಯಕ್ರಮ ನಡೆಯಿತು

FOLLOW MY FACEBOOK PAGE
ದೊಡ್ಡಬಳ್ಳಾಪುರ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ ಇಲ್ಲಿ ವಿಜ್ಞಾನದ ವಿಭಾಗದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಶನಿವಾರ ನಡೆಯಿತು. 

ಕಾರ್ಯಕ್ರಮದ ಪ್ರಸಾವಿಕ ನುಡಿಯನ್ನು ನಡೆಸಿದ ಡಾ. ಎಂ ಸತೀಶ್ ರವರು ಸತತ ಪ್ರಯತ್ನದಿಂದ ಯಾವ ಕೆಲಸವನ್ನು ಆದರೂ ಪೂರ್ಣ ಮಾಡಬಹುದು. ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಬೆಳೆದ ಬಗ್ಗೆ ಹಾಗೂ ಕಾಲೇಜಿನಲ್ಲಿ ಇರುವ ಸೌಲಭ್ಯಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ .ತಿರುಮಲೇಶ ರವರು ಮಾತನಾಡಿ ಖಾಸಗಿ ಕಾಲೇಜುಗಳಿಗಿಂತ ಸರ್ಕಾರಿ ಕಾಲೇಜುಗಳು ಈಗ ಹೆಚ್ಚು ಅಭಿವೃದ್ಧಿಯಾಗಿದೆ, ಎಂದು ಮಾತನಾಡಿ, ಬಿಎಸ್ಸಿ ನಂತರ ಏನೆಲ್ಲ ಇದೆ ಎಂಬುದನ್ನು ತಿಳಿಸಿ, ಶಾರ್ಟ್ ವೇವ್ಸ್ ನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸದಾಶಿವ ರಾಮಚಂದ್ರಗೌಡ ರವರು ಮಾತನಾಡಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಹಲವು ಬಗೆಯ ಕಲೆಗಳು ಇವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಡಾ. ಕೆಂಪರಾಜು,ವಿ.ಎನ್ ರೆಡ್ಡಿ, ಡಾ.ಪ್ರಕಾಶ್ ಮಂಟೇದ, ಡಾ. ಸಿದ್ದರಾಮ ರಾಜು, ಎಲ್ಲಾ ಆಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.